ಶ್ರೀ ಸುಬ್ರಮಣ್ಯ ಸ್ಥಾನಿಕ ಸಮಾಜ ಸೇವಾ ಸಂಘ (ರಿ.) ಸುಳ್ಯ
ಸುಳ್ಯ, 24.01.2016: ಸಂಘದ ಸದಸ್ಯರಿಂದ ಮಠಂತಬೆಟ್ಟುವಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ದಿನಾಂಕ 24.01.2016 ಭಾನುವಾರ ಸಂಘದ ಸದಸ್ಯರಿಂದ ಮಠಂತಬೆಟ್ಟುವಿನಲ್ಲಿ ಬ್ರಹ್ಮಕಲಶ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಾಯಿತು. ಈ ಕಾರ್ಯಕ್ರಮವನ್ನು ಡಾ ವೀಣಾ ಸಂಯೋಜಿಸಿದ್ದರು. ಕೃಷ್ಣ ರಾವ್ ನಾವೂರು, ಶ್ರೀಧರ ರಾವ್ ಮೊದಲಾದವರು ವ್ಯವಸ್ಥೆಯಲ್ಲಿ ಸಹಕರಿಸಿದರು.
20.01.2016, ಸುಳ್ಯ: ಹೊರೆ ಕಾಣಿಕೆ ಸಮರ್ಪಣೆ:
ದಿನಾಂಕ 20.01.2016 ಬುಧವಾರ ಸಂಘದ ಸುಳ್ಯದ ಸದಸ್ಯರ ವತಿಯಿಂದ ಮಠಂತಬೆಟ್ಟು ಬ್ರಹ್ಮಕಲಶೋತ್ವವಕ್ಕೆ ಹೊರೆಕಾಣಿಕೆ ಸಮರ್ಪಿಸಲಾಯಿತು. ಪೂರ್ವಾಹ್ನ ಜ್ಯೋತಿ ಆಸ್ಪತ್ರೆಯಲ್ಲಿ ಹೊರೆಕಾಣಿಕೆ ಸಂಗ್ರಹ ಮಾಡಲಾಯಿತು. ನಂತರ ಕೃಷ್ಣ ರಾವ್ ನಾವೂರು ಹಾಗೂ ಹಿರಿಯರಾದ ವಿಠಲ ರಾವ್ ಮೊದಲಾದವರು ವಾಹನದ ಮೂಲಕ ಹೊರೆಕಾಣಿಕೆಯನ್ನು ಮಠಂತಬೆಟ್ಟು ದೇವಸ್ಥಾನಕ್ಕೆ ತಲುಪಿಸಿದರು.